FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Wednesday 17 June 2015

-->
ಕೇಂದ್ರ ಸಮಿತಿ ಸಭೆ
ಪ್ರಿಯರೇ,
ನಮ್ಮ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿ ಸಭೆಯು ಇದೇ ಬರುವ ದಿನಾಂಕ 21-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಕೇಂದ್ರ ಸಮಿತಿ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದು ಸಂಘಟನೆಯ ಈ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ರೂಪಿಸಲು ಸಲಹೆ ಸೂಚನೆಗಳನ್ನಿತ್ತು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿ.
ಇತಿ,
ವಿಶ್ವಾಸಗಳೊಂದಿಗೆ
ಸ್ಥಳಃ ಕಾಸರಗೋಡು ಸುಬ್ರಹ್ಮಣ್ಯ ಭಟ್ ಕೆ
ದಿನಾಂಕಃ 17-06-2015 ಪ್ರಧಾನ ಕಾರ್ಯದರ್ಶಿ ಕೇ.ಪ್ರಾ..ಮಾ.. ಸಂಘ, ಕಾಸರಗೋಡು.
ಅಜಂಡಾ.
1.ಪುನರವಲೋಕನ.
2.ಅಧ್ಯಾಪಕ ಭವನ – ನಿರ್ವಹಣೆ.
3.ಉಪಜಿಲ್ಲೆಗಳ ಮಹಾಸಭೆ.
4.ಅಧ್ಯಾಪಕ ಧ್ವನಿ.
5.ಸದಸ್ಯತನ ಅಭಿಯಾನ.
6.ಇತರ.
(ಸೂಚನೆಃ ಕೇಂದ್ರ ಸಮಿತಿ ಸಭೆ ನಿಗದಿತ ಕ್ಲಪ್ತ ಸಮಯಕ್ಕೆ ಆರಂಭವಾಗಿ 12.00 ಗಂಟೆಗೆ ಮುಕ್ತಾಯವಾಗುವುದು.)

No comments:

Post a Comment