FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday 3 May 2015

03-05-2015
ಕನ್ನಡ ಹೋರಾಟಗಾರ, ನೇರೋಳು ಸುಬ್ಬಣ್ಣ ಭಟ್ಟರ ನಿಧನಕ್ಕೆ ಸಂತಾಪ.
ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಹಿತದೃಷ್ಟಿಯಿಂದ ಸರಕಾರವು ಕೆಲವು ವಿಶೇಷ ಸವಲತ್ತನ್ನು ನೀಡುತ್ತಿದೆ , ಈ ನೆಲದಲ್ಲಿ ಕನ್ನಡಿಗರಿಗೆ ನ್ಯಾಯಸಮ್ಮತವಾಗಿ ದೊರೆಯಬೇಕಾದ ಸವಲತ್ತುಗಳಿಗೆ ಚ್ಯುತಿ ಬಂದಾಗ ದನಿ ಏರಿಸಿ ಕನ್ನಡ ಜಾಗೃತಿಯ ಬಗ್ಗೆ ಎಚ್ಚರಿಸುತ್ತಿದ್ದ ಹಿರಿಯ ನಿವತ್ತ ಮುಖ್ಯ ಶಿಕ್ಷಕರಾದ ನೇರೋಳು ಸುಬ್ಬಣ್ಣ ಭಟ್ಟರ ಅಗಲುವಿಕೆ ತುಂಬಲಾರದ ನಷ್ಟವಾಗಿದೆ. ಶ್ರೀಯುತರು ಕನ್ನಡ ಮಾಧ್ಯಮ ಶಾಲೆಗಳ ಪ್ರಬಂಧಕರ ಸಂಘದ ಅದ್ಯಕ್ಷರು ಆಗಿದ್ದರು.ಮೃತರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ಅವರ ಅಗುಲುವಿಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಸಂತಾಪ ವ್ಯಕ್ತಪಡಿಸಿದೆ.