FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 13 December 2021

2021-22 ನೇ ಸಾಲಿನ ಪದಾಧಿಕಾರಿಗಳು

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ (ರಿ.) ಕಾಸರಗೋಡು

2021-22 ನೇ ಸಾಲಿನ ಪದಾಧಿಕಾರಿಗಳು:

ಅಧ್ಯಕ್ಷರು:
* ಶ್ರೀನಿವಾಸ ರಾವ್, ಮುಖ್ಯೋಪಾಧ್ಯಾಯರು, ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರು.
ಉಪಾಧ್ಯಾಕ್ಷರು:
1) ಸುಕೇಶ ಎ. ಮುಖ್ಯೋಪಾಧ್ಯಾಯರು, ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರ
2) ಪ್ರಭಾವತಿ ಕೆದಿಲಾಯ, ಎನ್. ಎಚ್. ಎಸ್.ಎಸ್ ಪೆರಡಾಲ

ಪ್ರಧಾನ ಕಾರ್ಯದರ್ಶಿ:
* ಜಯಪ್ರಶಾಂತ್ ಪಾಲೆಂಗ್ರಿ, ಜಿ. ಎಲ್. ಪಿ ಶಾಲೆ ಕುಳೂರು
ಕಾರ್ಯದರ್ಶಿ:
1) ನವೀನ್ ಕುಮಾರ್, ಜಿ. ಎಚ್.ಎಸ್.ಎಸ್ ಬೆಳ್ಳೂರು
2) ಪ್ರದೀಪ್ ಕೆ.ವಿ. ಎ.ಯು. ಪಿ ಶಾಲೆ, ಬೋವಿಕಾನ

ಸಂಘಟನಾ ಕಾರ್ಯದರ್ಶಿ:
* ಪ್ರದೀಪ್ ಕುಮಾರ್ ಶೆಟ್ಟಿ, ಎ. ಎಲ್. ಪಿ ಶಾಲೆ ಕಿಳಿಂಗಾರ್

ಕೋಶಾಧಿಕಾರಿ:
* ಪದ್ಮಾವತಿ ಎಂ, ಮುಖ್ಯೋಪಾಧ್ಯಾಯಿನಿ, ಜಿ.ಎಲ್. ಪಿ ಶಾಲೆ ಬಡಾಜೆ
ಜತೆ ಕೋಶಾಧಿಕಾರಿ :
* ಶರತ್ ಕುಮಾರ್, ಎ. ಎಸ್. ಬಿ. ಎಸ್ ಕುಂಟಿಕಾನ

ಅಧಿಕೃತ ವಕ್ತಾರರು:
* ರವೀಂದ್ರನಾಥ ಬಳ್ಳಾಲ್, ಜಿ. ಎಚ್.ಎಸ್.ಎಸ್ ಪೈವಳಿಕೆ ನಗರ

ಲೆಕ್ಕ ಪರಿಶೋಧಕರು:
1) ಪುರುಷೋತ್ತಮ ಕುಲಾಲ್, ಎ. ಎಲ್. ಪಿ ಎಸ್ ಪನೆಯಾಲ
2) ಹರಿಕೃಷ್ಣ ಭಟ್, ಎ.ಯು. ಪಿ. ಎಸ್ ಕಲ್ಲಕಟ್ಟ

Sunday 12 December 2021

2021-22 ನೇ ಸಾಲಿನ ಮಹಾಸಭೆ : ನೂತನ ಪದಾಧಿಕಾರಿಗಳ ಪದಗ್ರಹಣ

        ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಕಾಸರಗೋಡು ಇದರ ಮಹಾಸಭೆಯು ತಾ. 12-12-2021 ನೇ ರವಿವಾರದಂದು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನದಲ್ಲಿ ನಡೆಯಿತು.

         ಮಹಾಸಭೆಯನ್ನು ನಿವೃತ್ತ ಅಧ್ಯಾಪಕ, ನಿಕಟ ಪೂರ್ವ ಕನ್ನಡ ಅಧ್ಯಾಪಕರ ಸಂಘದ ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕ್ಕಳ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾದ ರವೀಂದ್ರನಾಥ ಬಲ್ಲಾಳ್ ರವರು ವಹಿಸಿದ್ದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ಸುಕೇಶ್ ಎ, ಕೋಶಾಧಿಕಾರಿ ಪದ್ಮಾವತಿ ಎಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾಸರಗೋಡು ಘಟಕಕ್ಕೆ ಅಧ್ಯಕ್ಷರಾಗಿ ಮರು ನೇಮಕಗೊಂಡ ಎಸ್.ವಿ ಭಟ್ ಇವರನ್ನು ಸಂಘಟನೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

        ಕೇಂದ್ರ ಸಮಿತಿಯ ಕಾರ್ಯದರ್ಶಿ ಸುಕೇಶ್ ಎ ರವರು ವರದಿ ವಾಚಿಸಿ, ಕೋಶಾಧಿಕಾರಿ ಪದ್ಮಾವತಿ ಎಂ ಲೆಕ್ಕ ಪತ್ರ ಮಂಡಿಸಿದರು.

        ಬಳಿಕ 2021-22 ನೇ ಸಾಲಿನ ನೂತನ ಕೇಂದ್ರ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಬಾಕ್ರಬೈಲ್ ಎ. ಯು. ಪಿ ಶಾಲೆ ಪಾತೂರಿನ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ರಾವ್ ಆಯ್ಕೆಯಾದರು. ಉಪಾಧ್ಯಾಕ್ಷರಾಗಿ ಸರಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರದ ಮುಖ್ಯೋಪಾಧ್ಯಾಯರಾದ ಸುಕೇಶ ಎ ಹಾಗೂ ಎನ್. ಎಚ್. ಎಸ್.ಎಸ್ ಪೆರಡಾಲದ ಶಿಕ್ಷಕಿ ಪ್ರಭಾವತಿ ಕೆದಿಲಾಯ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಎಲ್. ಪಿ ಶಾಲೆ ಕುಳೂರಿನ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ, ಕಾರ್ಯದರ್ಶಿಗಳಾಗಿ ಜಿ.ಎಚ್.ಎಸ್.ಎಸ್ ಬೆಳ್ಳೂರಿನ ಶಿಕ್ಷಕ ನವೀನ್ ಕುಮಾರ್ ಹಾಗೂ ಎ.ಯು. ಪಿ ಶಾಲೆ, ಬೋವಿಕಾನದ ಶಿಕ್ಷಕ ಪ್ರದೀಪ್ ಕೆ.ವಿ, ಸಂಘಟನಾ ಕಾರ್ಯದರ್ಶಿಯಾಗಿ ಎ. ಎಲ್. ಪಿ ಶಾಲೆ ಕಿಳಿಂಗಾರಿನ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಕೋಶಾಧಿಕಾರಿಯಾಗಿ ಜಿ.ಎಲ್. ಪಿ ಶಾಲೆ ಬಡಾಜೆಯ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಎಂ, ಜತೆ ಕೋಶಾಧಿಕಾರಿಯಾಗಿ ಎ. ಎಸ್. ಬಿ. ಎಸ್ ಕುಂಟಿಕಾನದ ಶಿಕ್ಷಕ ಶರತ್ ಕುಮಾರ್, ಅಧಿಕೃತ ವಕ್ತಾರರಾಗಿ ಜಿ. ಎಚ್.ಎಸ್.ಎಸ್ ಪೈವಳಿಕೆ ನಗರದ ಶಿಕ್ಷಕ ರವೀಂದ್ರನಾಥ ಬಳ್ಳಾಲ್, ಲೆಕ್ಕ ಪರಿಶೋಧಕರಾಗಿ ಎ. ಎಲ್. ಪಿ ಎಸ್ ಪನೆಯಾಲದ ಶಿಕ್ಷಕ ಪುರುಷೋತ್ತಮ ಕುಲಾಲ್ ಹಾಗೂ ಎ.ಯು. ಪಿ. ಎಸ್ ಕಲ್ಲಕಟ್ಟದ ಶಿಕ್ಷಕ ಹರಿಕೃಷ್ಣ ಭಟ್ ಆಯ್ಕೆಯಾದರು.

         ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ಪದ್ಮಾವತಿ ಎಂ ವಂದಿಸಿದರು. ಕೇಂದ್ರ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.