FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Friday 26 September 2014

27-09-2014
-->
ಕನ್ನಡ ಪಠ್ಯ ಪುಸ್ತಕಗಳನ್ನು ಕಾಸರಗೋಡಿನಲ್ಲಿ ಮುದ್ರಿಸಿ-ಕನ್ನಡ ಅಧ್ಯಾಪಕ ಸಂಘ.
ಇತ್ತೀಚೆಗೆ ಶಿಕ್ಷಣ ಇಲಾಖೆಯು ಮುದ್ರಿಸಿ ವಿತರಿಸಿದ ಹೈಯರ್ ಸೆಕಂಡರಿ ವಿಭಾಗದ ಕನ್ನಡ ಐಚ್ಛಿಕ ವಿಷಯದ ಪುಸ್ತಕದಲ್ಲಿ ಅನೇಕ ದೋಷಗಳು ನುಸುಳಿ ಬಂದಿದ್ದು ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಭಾಷೆ ತಿಳಿಯದ ಸ್ಥಳದಲ್ಲಿ ಮುದ್ರಣಗೊಳ್ಳುವುದೇ ಇದಕ್ಕೆ ಕಾರಣವೆಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಉತ್ಕೃಷ್ಟಾಗಿ ನಿರ್ಮಿಸಿಕೊಟ್ಟ ಪುಸ್ತಕವನ್ನು ಅತಿ ಕೆಟ್ಟದಾಗಿ ಮುದ್ರಿಸಿ ವಿತರಿಸಿದುದು ಕನ್ನಡಿಗರಿಗೇ ಮಾಡಿದ ಅವಮಾನವೆಂದು ಸಂಘಟನೆ ತನ್ನ ನಿಲುವನ್ನು ಅಧಿಕೃತರಿಗೆ ವ್ಯಕ್ತಪಡಿಸಿದೆ .ಇದರ ಕುರಿತು ಸರಕಾರಕ್ಕೆ ದೂರು ಸಲ್ಲಿಸಲಾಗಿದೆ.
ಜಿಲ್ಲೆಯಲ್ಲಿ ನಡೆಯುವ ರಾಜ್ಯಸರಕಾರದ ಪಠ್ಯಪುಸ್ತಕ ನಿರ್ಮಾಣ ಕಾರ್ಯಾಗಾರದಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ನಿರ್ಮಿಸಿ ಅದರ ಶಿಫಾರಸಿನಂತೆ ಆಯ್ಕೆ ಪ್ರಕ್ರಿಯೆಯನ್ನು ಮಾಡಬೇಕೆಂದು ಇಲಾಖೆಯನ್ನು ಒತ್ತಾಯಿಸಲಾಗಿದೆ. ಯಾಕೆಂದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಾತ್ರ ಕನ್ನಡ ಬಲ್ಲ ಶಿಕ್ಷಣಾಧಿಕಾರಿಗಳಿದ್ದಾರೆ. ಕೇರಳದ ಯಾವ ಪ್ರದೇಶದಲ್ಲಿಯೂ ಈ ವ್ಯವಸ್ಥೆ ಅಸ್ಥಿತ್ವದಲ್ಲಿಲ್ಲ. ಎಸ್.ಸಿ..ಆರ್.ಟಿ.ಯಲ್ಲಿ ಕನ್ನಡ ಬಲ್ಲ ಅಧಿಕಾರಿಗಳ ಕೊರತೆಯಿಂದ ಆಗುವ ಅನೇಕ ಪ್ರಮಾದಗಳಿಗೆ ಇದು ಪರಿಣಾಮಕಾರಿಯಾದ ಮಾರ್ಗವಾಗಿದೆಯೆಂದು ಡಿ.ಪಿ..ಯವರಿಗೆ ಮನವರಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದೆಂದು ಕನ್ನಡಿಗ ಡಿ.ಪಿ..ಗೋಪಾಲಕೃಷ್ಣ ಭಟ್ ಎಡನೀರು ಇವರು ಭರವಸೆ ನೀಡಿದ್ದಾರೆ. ಎ೦ದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರಾಧ್ಯಕ್ಷ ಟಿ.ಡಿ.ಸದಾಶಿವರಾವ್ ನುಡಿದರು. ಅವರು ಜಿ.ಎಸ್.ಬಿ.ಎಸ್.ಕುಂಬಳೆಯಲ್ಲಿ ನಡೆದ ಸಂಘಟನೆಯ ಕೇಂದ್ರ ಸಭೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಪಠ್ಯಪುಸ್ತಕ, ಅಧ್ಯಾಪಕ ಪಠ್ಯ ಶಿಕ್ಷಕರ ಕೈ ಸೇರದ ಹಿನ್ನಲೆಯಲ್ಲಿ ನಡೆದ ಕ್ಲಸ್ಟರ್ ಬಹಿಷ್ಕಾರವನ್ನು ಯಶಸ್ವಿಗೊಳಿಸಿ ಸರಕಾರದ ಗಮನಸೆಳೆಯುಂತೆ ಮಾಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಕೇಂದ್ರದ ಉಪಾಧ್ಯಕ್ಷರಾದ ಮಹಾಲಿಂಗೇಶ್ವರ ಭಟ್ ಎ೦.ವಿ, ಮಂಜೇಶ್ವರ ಘಟಕಾಧ್ಯಕ್ಷ ಶ್ರೀನಿವಾಸ ರಾವ್ ಎ, ಮಂಜೇಶ್ವರ ಘಟಕದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು, ಕುಂಬಳೆ ಘಟಕದ ಪ್ರದೀಪ್ ಕುಮಾರ್ ಶೆಟ್ಟಿ, ಸತ್ಯನಾರಾಯಣ ಶರ್ಮಾ, ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಪ್ರಭಾವತಿ ಕೆದಿಲ್ಲಾಯ ಪುಂಡೂರು ವಂದಿಸಿದರು. ದಿನಾಂಕ 30ರಂದು ತಿರುವನಂತಪುರದಲ್ಲಿ ಶಿಕ್ಷಣ ಸಚಿವರು ಕರೆದ ಅಂಗೀಕೃತ ಅಧ್ಯಾಪಕ ಸಂಘಟನೆಗಳ ಸಭೆಯಲ್ಲಿ ಪ್ರಸ್ತಾಪಿಸಬೇಕಾದ ವಿಚಾರಗಳ ಮತ್ತು ನಿವೇದನೆಗಳ ರೂಪುರೇಷೆಯನ್ನು ತಯಾರಿಸಲಾಯಿತು.

No comments:

Post a Comment