FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Sunday 16 August 2015


16-08-2015
ಕಯ್ಯಾರರ ದಾರಿದೀಪ ನಮ್ಮ ಕತ್ತಲೆಯನ್ನು ಹೋಗಲಾಡಿಸಲಿ.
 
ಶತಮಾನ ಕಂಡ ಶತಾಯುಷಿ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈ ಇವರು ಅಪ್ರತಿಮ ಹೋರಾಟಗಾರು, ಅನ್ಯಾಯವನ್ನು ಎದುರಿಸುವಲ್ಲಿ ಅವರ ದಿಟ್ಟತನ ಎಲ್ಲರಿಗೂ ಮಾದರಿಯಾದುದು.ಬಹು ಭಾಷಾ ಪಂಡಿತರೂ ಆದರ್ಶ ಶಿಕ್ಷಕರೂ ಆದ ಇವರ ಸಾಧನೆ ಅಪಾರ. ಕಾಸರಗೋಡು ಕನ್ನಡಿಗರ ಮುಖ್ಯ ಧ್ವನಿಯೆಂದೇ ಗುರುತಿಸಲ್ಪಟ್ಟ ಇವರ ಮಾರ್ಗದರ್ಶನ ಯುವಜನಾಂಗಕ್ಕೆ ದಾರಿದೀಪವಾಗಿದೆ, ಎ೦ದು ಎಸ್.ವಿ.ಭಟ್ ಅಧ್ಯಕ್ಷರು .ಸಾ..ಕಾಸರಗೋಡು ಘಟಕ ಇವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಜರಗಿದ ಕಯ್ಯಾರಿಗೆ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಪುಂಡರೀಕಾಕ್ಷ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಸತೀಷ ಕೆ, ಅಧಿಕೃತ ವಕ್ತಾರರಾದ ವಿಶಾಲಾಕ್ಷ ಪುತ್ರಕಳ ಮೊದಲಾದವರು ಅಧ್ಯಾಪಕ ಸಂಘದ ನುಡಿನಮನ ಸಲ್ಲಿಸಿ ಶ್ರೀಯುತರನ್ನು ಸ್ಮರಿಸಿದರು. ಕಾಸರಗೋಡು ಘಟಕದ ಅಧ್ಯಕ್ಷರಾದ ರಾಜೇಶ್ವರ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಪುಷ್ಪಾವತಿ ವಂದಿಸಿದರು.ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment