FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Thursday 13 August 2015

-->
-->
ಕಯ್ಯಾರರಿಗೆ ಕನ್ನಡ ಅಧ್ಯಾಪಕರಿಂದ ನುಡಿನಮನ
ಪ್ರಿಯರೇ,
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ನಾಡೋಜ ಡಾ/ ಕಯ್ಯಾರ ಕಿಞ್ಞಣ್ಣ ರೈಯವರಿಗೆ ನುಡಿನಮನ ಕಾರ್ಯಕ್ರಮವು ಇದೇ ಬರುವ ದಿನಾಂಕ 16-06-2015 ನೇ ರವಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಕಾಸರಗೋಡು ಬೀರಂತಬೈಲಿನಲ್ಲಿರುವ ಅಧ್ಯಾಪಕ ಭವನ ದಲ್ಲಿ ಜರಗಲಿದೆ. ಎಲ್ಲಾ ಶಿಕ್ಷಕ ಬಂಧುಗಳು ಈ ಸಭೆಯಲ್ಲಿ ಹಾಜರಿದ್ದು ಶ್ರೀಯುತರ ಸ್ಮರಣಾಂಜಲಿಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಬಳಿಕ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕಾಸರಗೋಡು, ಬೇಕಲ- ಹೊಸದುರ್ಗ ಉಪಜಿಲ್ಲಾ ಸಮಾವೇಶವು ಜರಗಲಿದೆ.

14-08-2015
ಅಗೋಸ್ತು 26 ರಂದು ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.
ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊರರಾಜ್ಯ ಕೇರಳ ಹಾಗೂ ಗೋವಾ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವು ಅಗೋಸ್ತು 26 ರಂದು ಕಾಸರಗೋಡಿನ ನಗರಸಭೆ ಸಭಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ವಿವಿಧ ಶಾಲೆಗಳಿಂದ ಎ೦ಭತ್ತಮೂರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಡಾ/ ಹನುಮಂತಯ್ಯ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಸ್ಥಳೀಯ ಶಾಸಕರು, ಪಿ.ಎಸ್.ಮೊಹಮ್ಮದ್ ಸಗೀರ್ ಜಿಲ್ಲಾಧಿಕಾರಿ, ಡಾ/ಶ್ರೀನಿವಾಸ್ ಎ. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ. .ವೇಣುಗೋಪಾಲನ್, ಜಿಲ್ಲಾ ಶಿಕ್ಷಣಾಧಿಕಾರಿಗಳು. ಕಾಸರಗೋಡು,ಮುರಳೀಧರ ಬಳ್ಳುಕುರಾಯ ಅಧ್ಯಕ್ಷರು ಕರ್ನಾಟಕ ಸಮಿತಿ ಕಾಸರಗೋಡು, ಟಿ.ಡಿ.ಸದಾಶಿವ ರಾವ್ . ಅಧ್ಯಕ್ಷರು ಕೇರಳ ಪ್ರಾಂತ್ಯಕನ್ನಡ ಮಾಧ್ಯಮ ಅಧ್ಯಾಪಕ ಸಂಘ, ಕಾಸರಗೋಡು.ಎಸ್.ವಿ.ಭಟ್, ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕ, ಜಯರಾಂ ಎಡನೀರು ಅಧ್ಯಕ್ಷರು. ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಕೇರಳ ಸರಕಾರ,ನ್ಯಾಯವಾದಿ ಎ.ಸುಬ್ಬಯ್ಯ ರೈ.ಅಧ್ಯಕ್ಷರು ತುಳು ಅಕಾಡಮಿ ಕೇರಳ ಸರಕಾರ ಮತ್ತು ಕನ್ನಡದ ಪ್ರಸಿದ್ಧ ಸಾಹಿತಿಗಳು, ಶಿಕ್ಷಣ ತಜ್ಞರು ಭಾಗವಹಿಸುವರು.

ಕುಂಬಳೆ ಉಪಜಿಲ್ಲಾ ಮಹಾಸಭೆ.
 
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕಾಸರಗೋಡು,  ಇದರ ಕುಂಬಳೆ ಉಪಜಿಲ್ಲಾ ಘಟಕದ ನೂತನ ಪದಾಧಿಕಾರಿಗಳು. ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ ಮುಖ್ಯೋಪಾಧ್ಯಾಯರು ಎ.ಎಲ್.ಪಿ.ಶಾಲೆ ಪಣಿಯೆ. ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ. ಅಧ್ಯಾಪಕರು ಎ.ಎಲ್.ಪಿ.ಶಾಲೆ ಕಿಳಿಂಗಾರು. ಕೋಶಾಧಿಕಾರಿ ಶ್ರೀ ಅಧ್ಯಾಪಕರು ವಿ.ಎ.ಎಲ್.ಪಿ.ಶಾಲೆ ಉಕ್ಕಿನಡ್ಕ. ಆಯ್ಕೆಯಾದರು. 
 ಅಧ್ಯಕ್ಷೆ  ಶ್ರೀಮತಿ.ಜ್ಯೋತಿ. ಕೆ
 ಕಾರ್ಯದರ್ಶಿ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ  ಡಿ.ಬಿ.

ಕಿರಣ ಶಂಕರ ಕೆ.ಎಸ್

No comments:

Post a Comment