FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Tuesday 16 September 2014


-->
16-09-2014
ಇನ್ನೂ ಬಾರದ ಕನ್ನಡ ಮಾಧ್ಯಮ ಅಧ್ಯಾಪಕ ಪಠ್ಯ -ಸರಕಾರದ ನಿರ್ಲಕ್ಷ್ಯಕ್ಕೆ ತೀವ್ರ ಅಸಮಾಧಾನ,
ಕ್ಲಸ್ಟರ್ ಬಹಿಷ್ಕರಿಸಿ, ಕನ್ನಡ ಅಧ್ಯಾಪಕ ಸಂಘ.

ಕಾಸರಗೋಡು,ಶಾಲೆ ಆರಂಭವಾಗಿ ಮೂರೂವರೆ ತಿಂಗಳು ಕಳೆದರೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಒದಗಿಸಬೇಕಾದ ಪಠ್ಯಪುಸ್ತಕ ಮತ್ತು ಅಧ್ಯಾಪಕ ಪಠ್ಯದ ಪೂರೈಕೆಯಲ್ಲಿ ವಿಳಂಬನೀತಿ ತೋರಿಸುವ ಸರಕಾರದ ಮಲತಾಯಿ ಧೋರಣೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ತೀವ್ರವಾಗಿ ವಿರೋಧಿಸಿದೆ.ಒಂದು ಕಡೆಯಲ್ಲಿ ಸಂಪೂರ್ಣ ಸಾಕ್ಷರತೆ, ಸಂಪೂರ್ಣ ಕಂಪ್ಯೂಟರ್ ಜ್ಞಾನ ಮೊದಲಾದ ನೂತನ ಯೋಜನೆಗಳನ್ನು ಪುಂಖಾನುಪುಂಖವಾಗಿ ಸ್ವಯಂ ಘೋಷಿಸಿಕೊಂಡು ಗಾಳಿಯಲ್ಲಿ ಗುದ್ದಾಡುವಂತೆ ಶಿಕ್ಷಕರನ್ನು ಸತಾಯಿಸುವ ಸರಕಾರದ ಕ್ರಮ ಖಂಡನೀಯವಾಗಿದೆ. ಹೊಸಪಠ್ಯಕ್ರಮದ ಅಂಗವಾಗಿ ಬದಲಾದ ಪಾಠ ಪುಸ್ತಕದ ಕುರಿತು ಸಮಗ್ರ ಚಿತ್ರಣ ನೀಡುವ ಅಧ್ಯಾಪಕ ಪಠ್ಯದ ವಿತರಣೆಯಲ್ಲಿ ಬಂದ ನ್ಯೂನತೆ ಕನ್ನಡ ಶಿಕ್ಷಣ ಕ್ಷೇತ್ರಕ್ಕೇ ಸರಕಾರ ಮಾಡುತ್ತಿರುವ ಘೋರ ಅಪಚಾರವಾಗಿದೆ. ಬಹಳ ನಾಜೂಕಾಗಿ ನೂತನ ಪಠ್ಯಕ್ರಮದಂತೆ ಅಧ್ಯಾಪನದಲ್ಲಿ ತೊಡಗಿದ ಕನ್ನಡ ಶಿಕ್ಷಕರ ತಾಳ್ಮೆಯನ್ನು ದೌರ್ಬಲ್ಯವೆಂದು ಪರಿಗಣಿಸುವ ಅಧಿಕೃತ ಧೋರಣೆಗೆದುರಾಗಿ ತನ್ನ ಅಸಹಕಾರ ಚಳವಳಿಯಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸಲು ಹಿಂಜರಿಯಲಾರದು ಎ೦ದು ಸಂಘಟನೆ ಅಭಿಪ್ರಾಯಪಟ್ಟಿದೆ.ಇದರ ಸೂಚನೆಯೆಂಬಂತೆ ಮುಂದೆ ನಡೆಯುವ ಕನ್ನಡ ಅಧ್ಯಾಪಕ ಪಠ್ಯ ರಹಿತ ಯಾವುದೇ ಕ್ಲಸ್ಟರ್ ತರಬೇತಿಗಳನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ.

No comments:

Post a Comment