FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Monday 18 August 2014


ಕಾಸರಗೋಡಿನಲ್ಲಿ ನಿರಂತರ ಕನ್ನಡ ಚಟುವಟಿಕೆಗಳು ನಡೆಯಬೇಕು -ಅಧ್ಯಾಪಕರು ಇದಕ್ಕೆ ನೇತೃತ್ವ ವಹಿಸಬೇಕು.

ಪಳ್ಳಿಕ್ಕರೆ, ಆಗಸ್ಟ್ 10 – ಕಾಸರಗೋಡಿನಲ್ಲಿ ನಿರಂತರ ಕನ್ನಡ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು. ನಮ್ಮನ್ನು ಕನ್ನಡ ಸಂಸ್ಕೃತಿಯಿಂದ ಹಿಂಜರಿಯುವಂತೆ ಮಾಡುವ ಯಾವುದೇ ಶಕ್ತಿಗಳಿಗೆ ನಾವು ತಲೆಬಾಗಬಾರದು, ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಅದನ್ನು ಎದುರಿಸುವ ಸಾಂವಿದಾನಿಕ ಹಕ್ಕು ನಮಗಿದೆ,ಅದೇ ರೀತಿ ಕನ್ನಡವನ್ನು ಕಟ್ಟಿ ಬೆಳೆಸುವ ಕರ್ತವ್ಯವೂ ನಮಗಿದೆ ಇದರಿಂದ ವಿಮುಖವಾಗುವುದು ಸರ್ವಥಾ ಸರಿಯಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅಗತ್ಯವಾದ ಸಂಪನ್ಮೂಲಗಳು ನಮ್ಮ ಮಣ್ಣಿನಲ್ಲಿಯೇ ಇದೆ ಅವುಗಳನ್ನು ಗುರುತಿಸಿ, ಕ್ರೋಡೀಕರಿಸಿ ತಮ್ಮದಾಗಿಸುವ ಚಾಣಾಕ್ಷತನವನ್ನು ನಾವು ಮೈಗೂಡಿಸಬೇಕಾಗಿದೆ, ಇದಕ್ಕಾಗಿ ಕನ್ನಡ ಅಧ್ಯಾಪಕ ಸಂಘವು ನಿರಂತರ ಪ್ರಯತ್ನಿಸಲಿ ಅದಕ್ಕೆ ನಮ್ಮ ಕೈಲಾದ ಸಹಾಯ ನಾವು ಮಾಡುವ ಪ್ರಯತ್ನ ಮಾಡುತ್ತೇವೆ - ಎ೦ದು ಹೊಸದುರ್ಗ ಕನ್ನಡ ಸಂಘದ ಅಧ್ಯಕ್ಷರಾದ ಬಿ.ವಸಂತ ಶೆಣೈ ಯವರು ನುಡಿದರು. ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಹೊಸದುರ್ಗ- ಬೇಕಲ ಉಪಜಿಲ್ಲಾ ಘಟಕಗಳ ಮಹಾಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಸಂಘಟನೆಯ ಉಪಜಿಲ್ಲಾ ಮಹಾಸಭೆಯು ಜಿ.ಎಚ್.ಎಸ್.ಎಸ್. ಪಳ್ಳಿಕ್ಕರೆಯಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಾರಿಜ ಎ೦ ವಹಿಸಿದ್ದರು. ಲಕ್ಷ್ಮಣ ಎಚ್. ಹೊಸದುರ್ಗ, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸತ್ಯನಾರಾಯಣ ರಾವ್.ಕೆ.ವಿ., ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ನಿವೃತ್ತ ಮುಖ್ಯ ಶಿಕ್ಷಕರಾದ ಶಶಿಕಲಾ ಎ೦.,ರಾವಣೇಶ್ವರ ಶಾಲೆಯ ಮುಖ್ಯ ಶಿಕ್ಷಕರಾದ ಭಾರತಿ ಶೆಣೈ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ವರದಿ ವಾಚನ, ಲೆಕ್ಕಪತ್ರ ಮಂಡನೆ ಮತ್ತು ಅಂಗೀಕಾರ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಸದಸ್ಯರ ಸಮಸ್ಯಗಳ ಕುರಿತು ಚರ್ಚೆ ನಡೆಯಿತು. ಹೇಮಂತ್ ಕುಮಾರ್, ನಯನಕುಮಾರಿ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪುಷ್ಪಾವತಿ ಕೆ. ಅಧ್ಯಕ್ಷರಾಗಿ, ತಿಲಕವಾಣಿ ಕಾರ್ಯದರ್ಶಿಯಾಗಿ ಮತ್ತು ರಜನಿಕುಮಾರಿ ಖಜಾಂಜಿಯಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರದೊಂದಿಗೆ ಸಭೆ ಸಂಪನ್ನಗೊಂಡಿತು.

No comments:

Post a Comment