FLASH NEWS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧಿಕೃತ ಬ್ಲಾಗ್ ಗೆ ಸುಸ್ವಾಗತ...

Thursday 23 October 2014

23-10-2014.
ಅಧ್ಯಾಪಕ ಪಠ್ಯ ಬಂತು  ಕ್ಲಸ್ಟರ್ ಬಹಿಷ್ಕಾರ ಇನ್ನಿಲ್ಲ. ಅಧ್ಯಾಪಕ ಸಂಘ.
ಕೇರಳ ರಾಜ್ಯದಾದ್ಯಂತ ಎಸ್.ಎಸ್.. ವತಿಯಿಂದ ನಡೆಯುವ ವಿವಿಧ ಕ್ಲಸ್ಟರ್ ಸಭೆಗಳಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಘೋಷಿಸಿದ್ದ ಬಹಿಷ್ಕಾರವನ್ನು ಹಿಂದಕ್ಕೆ ಪಡೆದಿದೆ.ಸಂಘಟನೆಯು ಅಧ್ಯಾಪಕ ಪಠ್ಯ ರಹಿತ ಯಾವುದೇ ಕ್ಲಸ್ಟರ್ ತರಬೇತಿಯನ್ನು ಬಹಿಷ್ಕರಿಸುವುದಾಗಿ ಘೋಷಿಸಿ ಈ ಹಿಂದಿನ ಕ್ಲಸ್ಟರ್ ತರಬೇತಿಗೆ  ಬಹಿಷ್ಕಾರ ಹಾಕಿತ್ತುಕನ್ನಡ ಅಧ್ಯಾಪಕರು ಒಗ್ಗಟ್ಟಿನಿಂದ ಸಂಘಟನೆಯ ಕರೆಯನ್ನು ಸ್ವೀಕರಿಸಿದ್ದರು . ನಮ್ಮ ಬೇಡಿಕೆ ಈಡೇರುವ ವರೆಗೆ ಬಹಿಷ್ಕಾರ ನಿಲ್ಲದು ಎಂಬ ಅಚಲ ನಿರ್ಧಾರವನ್ನು  ಅಧಿಕೃತರಿಗೆ ಸ್ಫಷ್ಟವಾಗಿ ತಿಳಿಸಿತ್ತು. ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಧ್ಯಾಪಕ ಪಠ್ಯವನ್ನು ತಲಪಿಸಲು ಸಹಕರಿಸಿದ  ಅಧಿಕಾರಿಗಳನ್ನು,    ಸಂಘಟನೆ ಅಭಿನಂದಿಸುತ್ತಿದೆ.ಇನ್ನು ಮುಂದೆ ಭಾಷಾಂತರಕ್ಕೆ ಬಾಕಿ ಇರುವ ದೈಹಿಕ ಶಿಕ್ಷಣ,ಕಲೆ ಮತ್ತು ವೃತ್ತಿ ಪರಿಚಯ ಕ್ಕೆ ಸಂಬಂಧಿಸಿದ ಪುಸ್ತಕಗಳು ಮಾತ್ರವಲ್ಲದೆ  ಪ್ರೀ ಪ್ರೈಮರಿ ಪಠ್ಯಪುಸ್ತಕವನ್ನೂ ಆದಷ್ಟು ಬೇಗ ಒದಗಿಸಬೇಕೆಂದು ಒತ್ತಾಯಿಸಿದೆ.ಈ ಸಂಬಂಧ ಜಿಲ್ಲೆಯ ಉಪನಿರ್ದೇಶಕರಿಗೂ ಎಸ್.ಸಿ..ಆರ್.ಟಿ. ನಿರ್ದೇಶಕರಿಗೆ ಮತ್ತು ಎಸ್.ಎಸ್..ನಿರ್ದೇಶಕರಿಗೆ  ಮನವಿ ಸಲ್ಲಿಸಲಾಗಿದೆ.

No comments:

Post a Comment